ಶನಿವಾರ, ಜುಲೈ 16, 2011

ಕುಸಿಯುತ್ತಿದೆ ಬಲದಂಡೆ ಸೇತುವೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ದಶಕಗಳ ಹಿಂದೆ ನಿರ್ಮಿಸಿದ ಹಳೆಯ ಸೇತುವೆಯನ್ನು ಕೆಡವಲು ಸಿಡಿಮದ್ದು ಬೇಕು, ಆದರೆ ಅದೇ ಜಾಗದಲ್ಲಿ ಕೇವಲ ತಿಂಗಳ ಹಿಂದೆ ಕಟ್ಟಿಸಿದ ನೂತನ ಸೇತುವೆ ಕೆಡವಲು ಒಂದು ಸಣ್ಣ ಕಬ್ಬಿಣದ ಸರಳು ಸಾಕು...
ಇದು ಗಾದೆ ಮಾತಲ್ಲ. ನಿಜ ವಿಷಯ. ಕಳಪೆ ಕಾಮಗಾರಿಯ ವಿರಾಟ್‌ರೂಪ.  ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ ಮಾಡಲಾಗಿರುವ ಸೇತುವೆ ಉದ್ಘಾಟನೆ ಭಾಗ್ಯ ಕಾಣುವ ಮೊದಲೇ ಕುಸಿಯಲಾರಂಭಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ