ಗುರುವಾರ, ಜೂನ್ 30, 2011



ಹಳ್ಳ ಹಿಡಿದ ನಾಲೆ ಸೇತುವೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ಪಟ್ಟಣ ಸಮೀಪದ ಚಾಮರಾಜ ಬಲದಂಡೆ ನಾಲೆಯ ಸೇತುವೆ ಕುಸಿಯುವ ಹಂತ ತಲುಪಿದೆ.
ಪ್ರತಿವರ್ಷ ನಾಲೆ, ಏರಿ ದುರಸ್ತಿಗಾಗಿ ಲಕ್ಷಾಂತರ ರೂ. ವ್ಯಯಿಸುವ ಅಧಿಕಾರಿಗಳಿಗೆ ತಮ್ಮ ಕಚೇರಿ ಪಕ್ಕದ ಕೂಗಳತೆ ದೂರದಲ್ಲಿರುವ ಕಿತ್ತುಹೋದ ನಾಲಾ ಸೇತುವೆ ಕಾಣದಿರುವುದಕ್ಕೆ ಜಾಣ ಕುರುಡು ಎನ್ನಬೇಕೋ ಅಥವಾ ದುರಸ್ತಿ ಲೆಕ್ಕದಲ್ಲಿ ಯಾರದೋ ಕಿಸೆ ತುಂಬಿಸಿದ್ದಾರೋ ತಿಳಿಯಬೇಕಾಗಿದೆ.
ಹಾಸನಕ್ಕೆ ತೆರಳುವ ರಸ್ತೆಯಲ್ಲಿ ನಾಲೆಯ ಬಲಕ್ಕೆ ತಿರುಗಿ ಸ್ವಲ್ವ ದೂರ ಏರಿ ಮೇಲೆ ತೆರಳಿದರೆ ಅಧಿಕಾರಿಗಳ `ನಿಷ್ಠಾವಂತ' ಕೆಲಸ ತಿಳಿಯುತ್ತದೆ.