ಶುಕ್ರವಾರ, ಸೆಪ್ಟೆಂಬರ್ 9, 2011

ಬಸ್ ನಿಲ್ದಾಣದಲ್ಲಿ ನಾಟಿಯೊಂದು ಬಾಕಿ!

 ರಾಜೇಂದ್ರ ರಾವ್ ಕೃಷ್ಣರಾಜನಗರ
ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭಗೊಂಡ ಪಟ್ಟಣದ ಸರಕಾರಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಇನ್ನೂ ಮುಗಿದಿಲ್ಲ. ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಪ್ರತಿನಿತ್ಯ ಕೊಳಚೆ ನೀರಿನ ಸ್ನಾನ ಮತ್ತು ಬಸ್‌ನ ಟೈರಿನಿಂದ ಸಿಡಿಯುವ ಕಲ್ಲುಗಳ ಹೊಡೆತದಿಂದ ತಪ್ಪಿಸಿಕೊಂಡು ಬಸ್ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ...!
 ೨೦೧೦ ರ ಪ್ರಾರಂಭದಲ್ಲಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಪ್ರಾರಂಭವಾಗಿ ಕುಂಟುತ್ತಾ ಆಮೆ ವೇಗದಲ್ಲಿ  ಸಾಗಿದೆ. ಹೇಗೋ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ, ನೆಲ ಮಾತ್ರ ಹಾಗೆ ಇದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿದ್ದು ಇದರ ಪರಿಣಾಮವನ್ನು ಜನತೆ ಎದುರಿಸುವಂತಾಗಿದೆ.