ಗುರುವಾರ, ಜುಲೈ 7, 2011

ವನ್ಯಜೀವಿಗಳ ಆರೈಕೆಗೆ ಮೀಸಲಾದ ವಿಶಿಷ್ಟ ಕುಟುಂಬ

ಎಂ.ಎಲ್.ರವಿಕುಮಾರ್ ಎಚ್.ಡಿ.ಕೋಟೆ
ಚಿನ್ನಾಟವಾಡುವ ಚಿರತೆಯನ್ನು ನೀವು ನೋಡಿರಬಹುದು. ಅದರೆ, ಮನುಷ್ಯರೊಟ್ಟಿಗೆ ಜತೆ ಜತೆಯಾಗಿಯೇ ಬದುಕುವು ದನ್ನು ಕಂಡಿದ್ದೀರಾ?..
ಎಚ್.ಡಿ.ಕೋಟೆ ಪಟ್ಟಣದಲ್ಲಿ  ವನ್ಯಜೀವಿಗಳೊಂದಿಗೆ ಒಡನಾಟ ಇಟ್ಟುಕೊಂಡ ಕುಟುಂಬವಿದೆ. ಅರಣ್ಯ ಇಲಾಖೆ ಚಾಲಕ ಬಸವನಾಯಕ ಕುಟುಂಬಕ್ಕೆ ಚಿರತೆ ಸಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ಆರೆಂಟು ತಿಂಗಳು ಸಾಕಿ ಸಲಹಿದ ನಾಲ್ಕು ಚಿರತೆ ಮರಿಗಳಲ್ಲಿ ಮೂರು ಈಗ ಮೈಸೂರು ಮೃಗಾಲಯದಲ್ಲಿವೆ. ಇನ್ನೊಂದು ಬೆಂಗಳೂರಿನ ಬನ್ನೇರಘಟ್ಟದಲ್ಲಿ ಆಶ್ರಯ ಪಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ