ಶುಕ್ರವಾರ, ಆಗಸ್ಟ್ 19, 2011

ಕೋಟಿ ಕೋಟಿ ಬಂದರೂ ಅರಸರ ಕಲ್ಲಳ್ಳಿ ಅತಂತ್ರ

ಹನಗೋಡು ನಟರಾಜ್ ಹುಣಸೂರು
ನೀರಿಗೆ ಹಾಹಾಕಾರ, ಬತ್ತಿಹೋದ ಕೆರೆಗಳು, ಕಾಂಪೌಂಡ್ ಇಲ್ಲದ ಆಸ್ಪತ್ರೆ, ನಿವೇಶನಕ್ಕೆ ಪರದಾಟ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯ ಆಸ್ಪತ್ರೆ, ಅವ್ಯವಸ್ಥಿತ ಗ್ರಾ.ಪಂ.ಕಚೇರಿ, ಶಿಥಿಲ ವಸತಿಗೃಹ...
ಇದು ರಾಜ್ಯವನ್ನು ಎಂಟು ವರ್ಷ ಆಳಿದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಹುಟ್ಟೂರು ಕಲ್ಲಹಳ್ಳ್ಳಿಯ ಸ್ಥಿತಿ.  ಅರಸರ ಬಗ್ಗೆ ವೇದಿಕೆ ಗಳಲ್ಲಿ ಹೊಗಳುವ ಪ್ರತಿನಿಧಿಗಳಿಗೆ ಕನಿಷ್ಠ ಅವರ ಹುಟ್ಟೂರನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಛಾತಿ ಇಲ್ಲದಿರು ವುದು ದೊಡ್ಡ ದುರಂತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ